ಇತ್ತಿಚೆಗೆ ಕನ್ನಡ ಬಿಗಬಾಸ ಎಂಟನೆ ಆವೃತ್ತಿ ಅರ್ಧಕ್ಕೆ ನಿಂತದ್ದಂತೂ ಅದರ ವಿಕ್ಷಕರಿಗೆ ಬೇಸರದ ಸಂಗತಿಯಾಗಿತ್ತು. ಅದರಲ್ಲೂ ನಟ ಸುದೀಪ ಅಭಿಮಾನಿಗಳಿಗೆ ವಾರಕ್ಕೊಮ್ಮೆ ಅವರನ್ನು ನೋಡುವುದೆ ಒಂದು ಸಂತಸದ ವಿಷಯವಾಗಿತ್ತು, ಸ್ಪರ್ಧಿಗಳ ಅಭಿಮಾನಿಗಳು ಹಾಗೂ ಕುಟುಂಬದವರಿಗಂತೂ ಹಬ್ಬದ ವಾತಾವರಣವೆ ಸರಿ. ಕಾರ್ಯಕ್ರಮದಲ್ಲಿ ಎನನ್ನು ಕಲಿಯಲು ಇಲ್ಲ ಎಂಬುದನ್ನು ಹೊರತಾಗಿಯೂ ಸಹ ಲಕ್ಷಾಂತರ ಜನರು ಕಾರ್ಯಕ್ರಮವನ್ನು ವಿಕ್ಷಿಸುತ್ತಾರೆ, ಇದಕ್ಕೆ ಸತತವಾಗಿ ಎಂಟನೆ ಆವೃತ್ತಿ ಬಂದಿರುವುದೆ ಸಾಕ್ಷಿ.
ನಿಮಗೆಲ್ಲರಿಗೂ ಗೊತ್ತಿರುವಂತೆ ಬಿಗಬಾಸ ಒಂದು ಮನರಂಜನೆಯ ಕಾರ್ಯಕ್ರಮ. ಇಲ್ಲಿ ಒಂದೆ ಮನೆಯಲ್ಲಿ ಹದಿನೈದು ಸ್ಪರ್ಧಿಗಳು ನೂರು ದಿನ ಬಂಧನದಲ್ಲಿರುತ್ತಾರೆ. ಮನೆಯ ತುಂಬ ಕ್ಯಾಮರಾಗಳು ಅವರ ವಿಕ್ಷಣೆಯಲ್ಲಿರುತ್ತಾರೆ. ವಾರಕ್ಕೊಮ್ಮೆ ಜನರಿಗೆ ಇಷ್ಟವಾಗದ ವ್ಯಕ್ತಿ ಮನೆಯಿಂದ ಹೊರಬರುತ್ತಾನೆ. ಹೀಗೆ ನೂರು ದಿನ ಕಳೆದಾಗ ಕೊನೆಯಲ್ಲಿ ಉಳಿಯುವ ಜನರ ಅಚ್ಚುಮೆಚ್ಚಿನ ವ್ಯಕ್ತಿಯನ್ನು ಗೆದ್ದ ಸ್ಪರ್ಧಿಯೆಂದು ಆಯ್ಕೆ ಮಾಡುತ್ತಾರೆ.ಇಂತಹ ಕಾರ್ಯಕ್ರಮ ಕೆಲವರಿಗೆ ಇಷ್ಟವಾಗುವುದು ಇಲ್ಲ, ಇದರ ಕಾರಣ ಹುಡುಕುತ್ತಾ ಹೋದಂತೆ ಅವರವರದ್ದೆ ಆದಂತಹ ಅಭಿಪ್ರಾಯಗಳು ಹುಟ್ಟುತ್ತವೆ. ಅವುಗಳಲ್ಲಿ ಪ್ರಮುಖವಾದವುದಳೆಂದರೆ
- ಬಿಗಬಾಸ ಕಾರ್ಯಕ್ರಮ ಬದುಕಿಗೆ ಹತ್ತಿರವಾಗಿದೆ,
- ದೇವರು ಕಣ್ಣಿಗೆ ಕಾಣುವುದಿಲ್ಲ-ಬಿಗಬಾಸ ಸಹ ಕಾಣುವುದಿಲ್ಲ
- ದೇವರಿಂದ ಆಜ್ಞೆಗಳು ಬರುತ್ತವೆ -ಬಿಗಬಾಸನಿಂದನೂ ಸ್ಪರ್ಧಿಗಳಿಗೆ ನೇರವಾಗಿ ಆಜ್ಞೆಗಳು ಬರುತ್ತವೆ
- ಮನುಷ್ಯನ ಬದುಕು ನೂರು ವರ್ಷ-ಬಿಗಬಾಸ ಸ್ಪರ್ಧಿಗಳು ನೂರು ದಿನ
- ಸ್ವಾಮಿಗಳು-ಗುರುಗಳು- ಬಿಗಬಾಸಲನಲ್ಲಿ ಸುದೀಪ
- ಬದುಕಲ್ಲಿ ಸಾವು - ಬಿಗಬಾಸಲ್ಲಿ ಎಲಿಮಿನೇಷನ
- ಬಿಗಬಾಸ ಮನೆ ಬಿಟ್ಟು ಹೊರ ಜಗತ್ತಿದೆ ಹಾಗೆ ಭೂಲೋಕವನ್ನು ಬಿಟ್ಟು ಇನ್ನೊಂದು ಲೋಕವಿದೆ.
- ಬಿಗಬಾಸಮನೆಗೆ ಕೆಲವು ದಿನ ಮಾತ್ರ- ಬದುಕು ಸಹ ಕೆಲವು ದಿನ ಮಾತ್ರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ