ನಾಯಕ ನಟ, ಪೋಷಕ ನಟ ಕಿಶೋರ್ ಮತ್ತೊಂದು ಇನ್ನಿಂಗ್ಸ್ ಆರಂಭ
ಕೆಲವು ಚಿತ್ರಗಳಲ್ಲಿ ನಾಯಕ ನಟ, ಹಲವಾರು ಚಿತ್ರಗಳಲ್ಲಿ ಪೋಷಕ ನಟ ಎನಿಸಿಕೊಂಡಿರುವ ನಟ ಕಿಶೋರ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿದ್ದಾರೆ. ಕನ್ನಡಿಗರೆ ಮನೆಯ ಮಗ ಯಾವತ್ತೂ ಅಚ್ಚು ಮೆಚ್ಚು.
ರೈತನಾಗಿ, ಪ್ರಗತಿಪರ ರೈತನಾಗಿರುವ ಕೀಶೋರ, ಹಲವಾರು ರೈತ ಚರ್ಚಾಕೂಟದಲ್ಲಿ ಭಾಗವಹಿಸಿ, ರೈತರಿಗೆ ಅಪಾರವಾದ ಜ್ಞಾನ ಮತ್ತು ಧೈರ್ಯ ನೀಡುತ್ತಾರೆ.
ಪುನೀತರಾಜಕೂಮಾರ ನಟನೆಯ ಆಕಾಶ ಚಿತ್ರದಲ್ಲಿ ನಾಯಕ ನಟಿಯ ಅಣ್ಣನ ಪಾತ್ರ ಹಾಗೂ ದುನಿಯಾ ಚಿತ್ರದಲ್ಲಿ ಪೋಲಿಸ ಅಧಿಕಾರಿಯ ಪಾತ್ರ ಎಂದೆಂದಿಗೂ ಜನ ಮಾನಸದಲ್ಲಿ ಉಳಿಯುತ್ತವೆ. ಉಳಿದವರು ಕಂಡಂತೆ ಚಿತ್ರದಲ್ಲಿ ಯುವ ಪ್ರೇಮಿಯ ಪಾತ್ರದಲ್ಲಿ ಬರುವ "ಘಟ್ಟದ ಅಂಚಿನ" ಹಾಡಿನಲ್ಲಿ ಅಮೋಘ ಮತ್ತು ಸುಂದರ ಅಭಿನಯ ಎಲ್ಲರನ್ನು ಗಮನ ಸೆಳೆಯುತ್ತದೆ.
ಇತ್ತೀಚೆಗೆ ರೈತ ಮಸೂದೆ ಜಾರಿಗೆ ತರುವ ವಿಷಯದಲ್ಲಿ ಇವರ ಒಂದು ಖಾಸಗಿ ವಾಹಿನಿ ಮಾಡಿದ ಸಂದರ್ಶನ ಎಲ್ಲರ ಅಚ್ಚುಮೆಚ್ಚಿಗೆ ಕಾರಣವಾಗಿತ್ತು. ರೈತ ಮಸೂದೆಯ ಒಳಹೋರ ಬಗ್ಗೆ ತಿಳಿಸಿ, ಸರಳವಾಗಿ ಅದರ ಸಾಧಕ ಬಾಧಕಗಳನ್ನು ಜನರಿಗೆ ತಿಳಿಸಿದ್ದರು ಜೊತೆಗೆ ರೈತ ಮಸೂದೆ ಕುರಿತಾದ ನಿರ್ಧಾರವನ್ನು ರೈತರ ವಿವೇಚನೆಗೆ ಬಿಟ್ಟಿದ್ದರು.
ನಟ ಕಿಶೋರ ತಮೀಳಿನಲ್ಲಿ ಎರಡು ವೆಬ ಸೀರಿಸ ಮಾಡುತ್ತಿದ್ದಾರೆ ಜೊತೆಗೆ ಇತ್ತಿಚೆಗೆ ಹೊಸ ಸಾಹಸಕ್ಕೂ ಕೈ ಹಾಕಿದ್ದಾರೆ. ಬರಿ ನಟನಾಗಿದ್ದ ಕಿಶೋರ ನಿರ್ದೇಶನ ಹಾಗೂ ನಿರ್ಮಾಣದ ಮೂಲಕ ಹೊಸ ಇನ್ನಿಂಗ್ಸ ಆರಂಭಿಸುತ್ತಾರೆ. ಕಿಶೋರ ನಿರ್ದೇಶಿಸಿ ಮತ್ತು ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರದ ಹೆಸರು " ಅಹಾನಿ"
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ